ಶಿವಮೊಗ್ಗ: ಅಡಿಕೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅಘೋಷಿತ ಬಂದ್ ಗುರುವಾರವೂ ಮುಂದುವರಿದಿದೆ.
ಮಾರುಕಟ್ಟೆಯ ಯಾರ್ಡ್ನಲ್ಲಿ ವರ್ತಕರು ಅಡಿಕೆ ವ್ಯಾಪಾರ-ವಹಿವಾಟಿಗೆ ಸಂಪೂರ್ಣ ವಿರಾಮ ನೀಡಿದ್ದರು. ಎಲ್ಲ ವರ್ತಕರು, ಬೆಳೆಗಾರರು ಅಘೋಷಿತ ಬಂದ್ಗೆ ಒಕ್ಕೊರಲಿನಿಂದ ಬೆಂಬಲ ಸೂಚಿಸಿದ್ದಾರೆ.
ಇದರಿಂದ ಇಡೀ ದಿನ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ಸಹಕಾರಿ ಸಂಘಗಳೂ ಮಾರುಕಟ್ಟೆಯಲ್ಲಿ ಪಾಲ್ಗೊಂಡಿಲ್ಲ. ಸಾಗರದಲ್ಲೂ ಸ್ಥಗಿತ: ಸಾಗರದ ಅಡಿಕೆ ಮಾರುಕಟ್ಟೆಯಲ್ಲಿಯೂ ಗುರುವಾರ ಅಡಿಕೆ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಶಿವಮೊಗ್ಗ ಅಡಿಕೆ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.