ನವದೆಹಲಿ: ಚಿನ್ನದ ಆಮದು ಸುಂಕವನ್ನು ಸದ್ಯದ ಶೇ 10ಕ್ಕಿಂತ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ನಾಲ್ಕು ವರ್ಷಗಳ ನಂತರ ಸರ್ಕಾರ ಆಮದು ಸುಂಕ ಕಡಿತ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆಮದು ತಗ್ಗಿದರೆ ರಫ್ತು ಕುಸಿತ ಸಮಸ್ಯೆ ಎದುರಿಸುತ್ತಿರುವ ಹರಳು ಮತ್ತು ಚಿನ್ನಾಭರಣ ತಯಾರಕರಿಗೆ ನೆರವಾಗಲಿದೆ.
ಸುಂಕ ಕಡಿತ ತಲಾ ಶೇ 2ರ ದರದ ಹಂತಗಳಲ್ಲಿ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ವರ್ಷದ ಬಜೆಟ್ ಮಂಡನೆ ಮೊದಲೇ ಈ ನಿರ್ಧಾರ ಜಾರಿಗೆ ತರಲು ಹಣಕಾಸು ಇಲಾಖೆಯು ಸುಳಿವು ನೀಡಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳಕ್ಕೆ ಚಿನ್ನದ ಆಮದು ಗರಿಷ್ಠ ಕೊಡುಗೆ ನೀಡುತ್ತಿರುವುದರಿಂದ ಸರ್ಕಾರ ಆಮದಿಗೆ ನಿರ್ಬಂಧ ವಿಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.