ಮುಂಬೈ: ಭಾರತೀಯ ಷೇರುಪೇಟೆಯ ರಾಕೇಶ್ ಜುಂಜನ್ವಾಲಾಮಾಲೀಕತ್ವದ ‘ಆಕಾಶ ಏರ್’ ಕಂಪನಿಯ ಮೊದಲ ವಿಮಾನ ಮುಂಬೈನಿಂದ ಹೊರಟುಅಹಮದಾಬಾದ್ನವಿಮಾನ ನಿಲ್ದಾಣದಲ್ಲಿ ಇಳಿಯಿತು.
ಭಾನುವಾರಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಲ್ಲಿನಛತ್ರಪತಿ ಶಿವಾಜಿ ಮಹಾರಾಜಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು. ಈ ವಿಮಾನಅಹಮದಾಬಾದ್ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.
‘ಆಕಾಶ ಏರ್’ ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ. ಕೆಳವರ್ಗದವರು ಹಾಗೂ ಕೆಳಮಧ್ಯಮವರ್ಗದವರೂ ಪ್ರಯಾಣಿಸುವಂತೆ ದರವನ್ನು ನಿಗದಿ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಈ ಕಾರಣಕ್ಕೆ ‘ಇದು ನಿಮ್ಮ ಆಕಾಶ‘ ಎಂಬ ಟ್ಯಾಗ್ಲೈನ್ ಅನ್ನು ಕಂಪನಿ ಇಟ್ಟುಕೊಂಡಿದೆ.
ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನ ಇಲಾಖೆಯಿಂದವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿತ್ತು. ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ. ಈಗಾಗಲೇ ಈ ಸಂಸ್ಥೆಯು72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಲವು ವಿಮಾನಗಳನ್ನುಕಂಪನಿ ಪಡೆದುಕೊಂಡಿದೆ.
ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಸಂಚಾರ ನಡೆಯಲಿದೆ ಎಂದು ಆಕಾಶ ಏರ್ ಕಂಪನಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.