ADVERTISEMENT

ಕೆನರಾ ಬ್ಯಾಂಕ್‌: ರಿಟೇಲ್‌ ಸಾಲ ಮೇಳ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 20:08 IST
Last Updated 26 ಫೆಬ್ರುವರಿ 2019, 20:08 IST
ಜನರಲ್‌ ಮ್ಯಾನೇಜರ್‌ ಡಾ. ಎಸ್‌. ಟಿ. ರಾಮಚಂದ್ರ ಅವರು, ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು
ಜನರಲ್‌ ಮ್ಯಾನೇಜರ್‌ ಡಾ. ಎಸ್‌. ಟಿ. ರಾಮಚಂದ್ರ ಅವರು, ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು   

ಬೆಂಗಳೂರು: ಕೆನರಾ ಬ್ಯಾಂಕ್‌ನ ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ರಿಟೇಲ್‌ ಸಾಲ ಮೇಳ ಆಯೋಜಿಸಲಾಗಿತ್ತು.

ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿನ ಮಾರುಕಟ್ಟೆ ವಿಭಾಗದ ಜನರಲ್‌ ಮ್ಯಾನೇಜರ್‌ ಡಾ. ಎಸ್‌. ಟಿ. ರಾಮಚಂದ್ರ ಅವರು, ಬ್ಯಾಂಕ್‌ನ ಹಲವಾರು ಯೋಜನೆಗಳು ಗ್ರಾಹಕರಿಗೆ ಉಪಯುಕ್ತವಾಗಿರುವ ಬಗ್ಗೆ ವಿವರಿಸಿದರು. ಫಲಾನುಭವಿಗಳಿಗೆ ಗೃಹ, ವಾಹನ ಖರೀದಿ ಸೇರಿದಂತೆ ವಿವಿಧ ಸಾಲಗಳ ಮಂಜೂರಾತಿ ಪತ್ರಗಳನ್ನು ವಿತರಿಸಿದರು.

ಪ್ರಾದೇಶಿಕ ಕಚೇರಿಯ ಮುಖ್ಯಸ್ಥೆ ಗೀತಾ ಕೆ. ಬಿ. ಅವರು ಮಾತನಾಡಿ, ‘ಪ್ರಧಾನಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಸೇರಿದಂತೆ ಬ್ಯಾಂಕ್‌ನ ಎಲ್ಲ ಸಾಲ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.