ನವದೆಹಲಿ : ಚೀನಾದಲ್ಲಿ ಆತಂಕ ಸೃಷ್ಟಿಸಿರುವ ‘ಕೋವಿಡ್–19’ ವೈರಸ್ ಹಾವಳಿಯಿಂದ ಉಂಟಾಗಿರುವ ಬಿಡಿಭಾಗ ಮತ್ತು ಕಚ್ಚಾ ಸರಕು ಪೂರೈಕೆ ವ್ಯತ್ಯಯದಿಂದಾಗಿ ಭಾರತದ ಆರ್ಥಿಕತೆ ಚೇತರಿಕೆಗೆ ಪೆಟ್ಟು ಬೀಳಲಿದೆ ಎಂದು ವರದಿಯೊಂದರಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ವೈರಸ್ ಹಾವಳಿ ಇನ್ನಷ್ಟು ದಿನಗಳ ಕಾಲ ಹೀಗೆಯೇ ಮುಂದುವರೆದರೆ ಬಿಡಿಭಾಗಗಳ ಪೂರೈಕೆಯಲ್ಲಿನ ವ್ಯತ್ಯಯದ ಕಾರಣಕ್ಕೆ ಸರಕುಗಳನ್ನು ತಯಾರಿಸುವ ದೇಶಿ ಕಂಪನಿಗಳು ತಮ್ಮ ತಯಾರಿಕಾ ಚಟುವಟಿಕೆಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಬೇಕಾಗುತ್ತದೆ.
‘ವ್ಯಾಪಕವಾಗಿ ಹರಡುತ್ತಿರುವ ವೈರಸ್ ಸೋಂಕಿನಿಂದಾಗಿ ಸರಕುಗಳ ಜಾಗತಿಕ ಪೂರೈಕೆ ಸರಣಿ ಜತೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಳಕು ಹಾಕಿಕೊಂಡಿರುವ ಭಾರತದ ಉದ್ದಿಮೆ ಮತ್ತು ವ್ಯಾಪಾರಕ್ಕೆ ಹಾನಿ ತಟ್ಟಲಿದೆ’ ಎಂದು ಡನ್ ಆ್ಯಂಡ್ ಬ್ರಾಡ್ಸ್ಟ್ರೀಟ್ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.