ADVERTISEMENT

ನರೇಗಾ: ಅಗತ್ಯ ಎದುರಾದರೆ ಹೆಚ್ಚು ಹಣ: ಸಚಿವ ಅನುರಾಗ್ ಠಾಕೂರ್

ಪಿಟಿಐ
Published 7 ಫೆಬ್ರುವರಿ 2021, 16:02 IST
Last Updated 7 ಫೆಬ್ರುವರಿ 2021, 16:02 IST

ನವದೆಹಲಿ: ಭವಿಷ್ಯದಲ್ಲಿ ಅಗತ್ಯ ಎದುರಾದರೆ ನರೇಗಾ ಯೋಜನೆಯ ಅಡಿ ವೆಚ್ಚ ಹೆಚ್ಚು ಮಾಡಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

2021–22ನೇ ಸಾಲಿನ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ಅನುದಾನ ಕಡಿತ ಮಾಡಲಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಉತ್ತರಿಸಿದ ಸಚಿವರು, ‘ನಮ್ಮ ಸರ್ಕಾರವು ಅನುದಾನವನ್ನು ಹೆಚ್ಚಿಸುತ್ತಲೇ ಬಂದಿದೆ. ಆದರೆ, ಕಾಂಗ್ರೆಸ್ಸಿನವರು ಪರಿಷ್ಕೃತ ಅಂದಾಜುಗಳನ್ನು ಮಂಡಿಸುವಾಗ ಈ ಯೋಜನೆಗಾಗಿನ ಅನುದಾನವನ್ನು ಕಡಿಮೆ ಮಾಡುತ್ತಿದ್ದರು’ ಎಂದಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ₹ 77 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಠಾಕೂರ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.