ನವದೆಹಲಿ: ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿಗೆ ಜಾರಿಯಲ್ಲಿ ಇರುವ ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಯನ್ನು ಒಂದು ವರ್ಷದವರೆಗೆ ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೊರೊನಾ ವೈರಾಣು ಪಿಡುಗಿನಿಂದ ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಕಾರ್ಪೊರೇಟ್ ವಲಯದ ಸಾಲಗಾರರಿಗೆ ಇದರಿಂದ ನೆಮ್ಮದಿ ದೊರೆಯಲಿದೆ.
ಸಾಲ ಮರುಪಾವತಿ ಮಾಡದ ಸುಸ್ತಿದಾರರಿಂದ ಸಾಲ ವಸೂಲಾತಿಗೆ ಅವಕಾಶ ಮಾಡಿಕೊಟ್ಟಿದ್ದ ‘ಐಬಿಸಿ’ ಪ್ರಕ್ರಿಯೆಗೆ ಈಗ ಒಂದು ವರ್ಷದವರೆಗೆ ತಡೆ ದೊರೆಯಲಿದೆ.
‘ಐಬಿಸಿ’ಗೆ ತರಲಿರುವ ತಿದ್ದುಪಡಿಯಿಂದ ಬ್ಯಾಂಕ್ಗಳು ಸಾಲಗಳನ್ನು ಮರು ಹೊಂದಾಣಿಕೆ ಮಾಡಲೂ ಅವಕಾಶ ದೊರೆಯಲಿದೆ. ಸಾಲ ಮರುಪಾವತಿಸದಿರುವುದು 90 ದಿನಗಳನ್ನು ದಾಟಿದರೆ ಅದನ್ನು ಸುಸ್ತಿ ಸಾಲ ಎಂದು ಪರಿಗಣಿಸಲಾಗುತ್ತಿದೆ.
‘ಐಬಿಸಿ’ಯ ಮೂರು ಸೆಕ್ಷನ್ಗಳನ್ನು ಒಂದು ವರ್ಷದವರೆಗೆ ರದ್ದುಪಡಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ. ಸುಗ್ರೀವಾಜ್ಞೆ ಜಾರಿಗೆ ಬರುವ ದಿನದಿಂದ ತಿದ್ದುಪಡಿ ಅನ್ವಯವಾಗಲಿದೆ. ಇದರಿಂದ ಸಾಲ ಮರುಪಾವತಿಸಲು ಕಾರ್ಪೊರೇಟ್ ಸಾಲಗಾರರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.