ADVERTISEMENT

ಜಿಆರ್‌ಟಿಯಲ್ಲಿ ಆಷಾಢ ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 16:18 IST
Last Updated 7 ಜುಲೈ 2022, 16:18 IST

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜಿಆರ್‌ಟಿ ಜುವೆಲರ್ಸ್‌, ಆಷಾಢ ಮಾಸದಲ್ಲಿ ತನ್ನಲ್ಲಿ ಚಿನ್ನ, ಆಭರಣ ಖರೀದಿಸುವವರಿಗಾಗಿ ‘ಆಷಾಢ ಆಶ್ಚರ್ಯ’ ಕೊಡುಗೆ ಆರಂಭಿಸಿದೆ. ಇದರ ಅಡಿಯಲ್ಲಿ ಪ್ರತಿ ಖರೀದಿಗೂ ಒಂದು ಉಡುಗೊರೆ ಇರುತ್ತದೆ ಎಂದು ಕಂಪನಿ ಹೇಳಿದೆ.

ಖರೀದಿಸಿದ ಚಿನ್ನ, ಆಭರಣಗಳ ಮೌಲ್ಯ ಹೆಚ್ಚಿದ್ದರೆ ಉಡುಗೊರೆಯೂ ದೊಡ್ಡದಿರುತ್ತದೆ. ಬ್ಯಾಂಕಿಂಗ್ ಪಾಲುದಾರರ ಮೂಲಕ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಯುಪಿಐ ಬಳಸಿ ಹಣ ಪಾವತಿ ಮಾಡುವವರಿಗೆ ಆಶ್ಚರ್ಯಕರ ಉಡುಗೊರೆಗಳು ಇರಲಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಈ ಕೊಡುಗೆಗಳು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಖರೀದಿಗಳಿಗೆ ಅನ್ವಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT