ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಜೋಯಾಲುಕ್ಕಾಸ್, ಜುಲೈ 25ರಿಂದ ಆಗಸ್ಟ್ 17ರವರೆಗೆ ‘ಜ್ಯುವೆಲ್ಸ್ ಆಫ್ ಜಾಯ್’ ವಿಶೇಷ ಉತ್ಸವ ಆರಂಭಿಸಿದೆ.
ಈ ಉತ್ಸವದ ಭಾಗವಾಗಿ, ಗ್ರಾಹಕರಿಗೆ ವಜ್ರ ಮತ್ತು ಕತ್ತರಿಸದ ವಜ್ರದ ಮೌಲ್ಯದ ಮೇಲೆ ಶೇಕಡ 25ರಷ್ಟು ರಿಯಾಯಿತಿ ದೊರೆಯಲಿದೆ. ₹1 ಲಕ್ಷ ಮತ್ತು ಅದಕ್ಕಿಂತಲೂ ಅಧಿಕ ಮೌಲ್ಯದ ಚಿನ್ನ ಮತ್ತು ಅಮೂಲ್ಯ ಹರಳುಗಳನ್ನು ಖರೀದಿಸುವ ಗ್ರಾಹಕರಿಗೆ 5 ಗ್ರಾಂ ಬೆಳ್ಳಿಯ ಗಟ್ಟಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಜೋಯಾಲುಕ್ಕಾಸ್ ತಿಳಿಸಿದೆ.
‘ಹಬ್ಬಗಳು ಸುಂದರ ನೆನಪುಗಳ ಸಂತಸವನ್ನು ತರುತ್ತವೆ. ಹೀಗಾಗಿ, ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸಲು ಆಗಸ್ಟ್ 17ರವರೆಗೆ ಗ್ರಾಹಕರಿಗೆ ಈ ಕೊಡುಗೆ ನೀಡುತ್ತಿದ್ದೇವೆ. ಮಳಿಗೆಯಲ್ಲಿ ವಿವಿಧ ಶ್ರೇಣಿಯ ಆಭರಣಗಳು ಲಭ್ಯವಿವೆ. ಗ್ರಾಹಕರು ಹತ್ತಿರದ ಜೋಯಾಲುಕ್ಕಾಸ್ ಮಳಿಗೆಗೆ ಭೇಟಿ ನೀಡಿ ಕೊಡುಗೆಯನ್ನು ಪಡೆದುಕೊಳ್ಳಬೇಕು’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಆಲುಕ್ಕಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.