ADVERTISEMENT

ಕಲ್ಯಾಣ್‌ ಜುವೆಲರ್ಸ್‌ ಅಧ್ಯಕ್ಷರಾಗಿ ಮಾಜಿ ಸಿಎಜಿ ವಿನೋದ್‌ ರಾಯ್‌ ನೇಮಕ

ಪಿಟಿಐ
Published 28 ಮಾರ್ಚ್ 2022, 11:37 IST
Last Updated 28 ಮಾರ್ಚ್ 2022, 11:37 IST
ವಿನೋದ್‌ ರಾಯ್‌
ವಿನೋದ್‌ ರಾಯ್‌   

ನವದೆಹಲಿ: ಕಲ್ಯಾಣ್‌ ಜುವೆಲರ್ಸ್‌ ಇಂಡಿಯಾ ಕಂಪನಿಯು ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ಅವರನ್ನು ಅಧ್ಯಕ್ಷ ಮತ್ತು ಸ್ವತಂತ್ರ ಕಾರ್ಯನಿರ್ವಾಹಕೇತರ ನಿರ್ದೇಶಕರನ್ನಾಗಿ ನೇಮಿಸಿದೆ.

ಈ ನೇಮಕಕ್ಕೆ ಷೇರುದಾರರು ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ದೊರೆಯಬೇಕಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಟಿ.ಎಸ್‌. ಕಲ್ಯಾಣ್‌ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಂಪನಿಯ ಆಡಳಿತ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.