ಮಂಗಳೂರು: ಕರ್ಣಾಟಕ ಬ್ಯಾಂಕ್, ಠೇವಣಿಗಳ ಮೇಲಿನ ಬಡ್ಡಿದರವನ್ನು ಕೊಂಚ ಹೆಚ್ಚಿಸಿದ್ದು, ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ.
₹ 10 ಕೋಟಿಯವರೆಗೆ 1ರಿಂದ 2 ವರ್ಷದ ಠೇವಣಿಗೆ ಈ ಮೊದಲಿದ್ದ ಶೇ 7.40ರ ಬಡ್ಡಿ ಬದಲಿಗೆ ಇನ್ನು ಶೇ 7.50ರಷ್ಟು ಬಡ್ಡಿ ದೊರೆಯಲಿದೆ.
ಹಿರಿಯ ನಾಗರಿಕರಿಗೆ ₹ 5 ಕೋಟಿವರೆಗಿನ ಎಲ್ಲಾ ಹಂತಗಳಲ್ಲಿ ಠೇವಣಿಗೆ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ದೊರೆಯಲಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.