ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷರಾಗಿ ಸುಮನ್ ಕೆ. ಬೆರಿ ಅವರನ್ನು ನೇಮಿಸಲಾಗಿದೆ. ರಾಜೀವ್ ಕುಮಾರ್ ಅವರ ಹಠಾತ್ ರಾಜೀನಾಮೆ ಬಳಿಕ ಈ ನೇಮಕ ನಡೆದಿದೆ.
ಕುಮಾರ್ ಅವರ ಅವಧಿಯು ಇದೇ ತಿಂಗಳ 30ರಂದು ಅಂತ್ಯವಾಗಲಿದ್ದು, ಬೆರಿ ಅವರು ಮೇ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬೆರಿ ಅವರು ದೆಹಲಿಯ ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿಯಲ್ಲಿ (ಎನ್ಸಿಎಇಆರ್) ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಆರ್ಥಿಕ ಸಲಹಾ ಸಮಿತಿ, ಸಾಂಖ್ಯಿಕ ಸಮಿತಿ ಮತ್ತು ಆರ್ಬಿಐನ ಹಣಕಾಸು ನೀತಿಯ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.