ಮುಂಬೈ: ವಸೂಲಾಗದೆ ಇರುವ ಸಾಲಗಳನ್ನು ಗರಿಷ್ಠ ಪ್ರಮಾಣದಲ್ಲಿ ವಸೂಲು ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಉದ್ದೇಶಪೂರ್ವಕ ಸುಸ್ತಿದಾರರು ಬಾಕಿ ಇರಿಸಿಕೊಂಡಿರುವ ಮೊತ್ತವನ್ನು ಬ್ಯಾಂಕ್ಗಳು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಕಾಶ ಕಲ್ಪಿಸಿದೆ. ‘ವಂಚನೆ’ ಎಂದು ವರ್ಗೀಕರಣ ಆಗಿರುವ ಖಾತೆಗಳಿಗೂ ಇದು ಅನ್ವಯವಾಗುತ್ತೆ.
ಆರ್ಬಿಐ ನಿಯಂತ್ರಣದಲ್ಲಿ ಇರುವ ಎಲ್ಲ ಸಂಸ್ಥೆಗಳು ಮಾತುಕತೆ, ಹೊಂದಾಣಿಕೆ ಮೂಲಕ ಸಾಲದ ವ್ಯಾಜ್ಯವನ್ನು ಇತ್ಯರ್ಥ ಮಾಡಿಕೊಳ್ಳಲು ತಮ್ಮ ಆಡಳಿತ ಮಂಡಳಿಯು ಒಪ್ಪಿಗೆ ನೀಡಿರುವ ನೀತಿಯೊಂದನ್ನು ಹೊಂದಿರಬೇಕು ಎಂದು ಆರ್ಬಿಐ ಅಧಿಸೂಚನೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.