ADVERTISEMENT

ಐಐಎಸ್‌ಸಿಗೆ ₹24 ಕೋಟಿ ದೇಣಿಗೆ ನೀಡಿದ ಎಸ್‌ಬಿಐ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:26 IST
Last Updated 17 ಮಾರ್ಚ್ 2023, 22:26 IST

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಚಟುವಟಿಕೆಯ ಭಾಗವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ಅಸ್ಥಿ ಚಿಕಿತ್ಸೆ ವಿಭಾಗ) ನಿರ್ಮಾಣ ಮಾಡಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ₹ 24 ಕೋಟಿ ದೇಣಿಗೆ ನೀಡಿದೆ.

ಐಐಎಸ್‌ಸಿ ನಿರ್ದೇಶಕ ಜಿ. ರಂಗರಾಜನ್‌, ರಿಜಿಸ್ಟ್ರಾರ್‌ ಕ್ಯಾಪ್ಟನ್‌ ಶ್ರೀಧರ್ ವಾರಿಯರ್‌, ಎಸ್‌ಬಿಐ ಚೀಫ್‌ ಜನರಲ್ ಮ್ಯಾನೇಜರ್‌ ನಂದ ಕಿಶೋರ್, ನೆಟ್‌ವರ್ಕ್‌ 2ನ ಜನರಲ್‌ ಮ್ಯಾನೇಜರ್‌ ಸಂದೀಪ್ ಭಟ್ನಾಗರ್‌, ಡೆಪ್ಯುಟಿ ಜನರಲ್ ಮ್ಯಾನೇಜರ್‌ ಅಲೋಕ್‌ ಕುಮಾರ್‌ ದ್ವಿವೇದಿ ಮತ್ತು ಬೆಂಗಳೂರು ಉತ್ತರದ ಡೆಪ್ಯುಟಿ ಜನರಲ್ ಮ್ಯಾನೇಜರ್‌ ಮುರಳಿ ಕೃಷ್ಣ ಹಾಗೂ ಬ್ಯಾಂಕ್‌ನ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT