ADVERTISEMENT

ಏರ್‌ ಇಂಡಿಯಾ ವಿಮಾನ ಅಪಘಾತದ ಸಂತ್ರಸ್ತರಿಗಾಗಿ ಟ್ರಸ್ಟ್ ಸ್ಥಾಪನೆ

ಪಿಟಿಐ
Published 18 ಜುಲೈ 2025, 13:49 IST
Last Updated 18 ಜುಲೈ 2025, 13:49 IST
ಏರ್‌ ಇಂಡಿಯಾ ವಿಮಾನ
ಏರ್‌ ಇಂಡಿಯಾ ವಿಮಾನ   

ನವದೆಹಲಿ: ಏರ್‌ ಇಂಡಿಯಾ ವಿಮಾನ ಅಪಘಾತದ ಸಂತ್ರಸ್ತರಿಗಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ ₹500 ಕೋಟಿ ಮೊತ್ತದ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅನ್ನು ಸ್ಥಾಪನೆ ಮಾಡಿವೆ.

ಎಐ–171 ಕ್ಷೇಮಾಭಿವೃದ್ಧಿ ಟ್ರಸ್ಟ್‌ ಹೆಸರಿನಲ್ಲಿ ಮುಂಬೈನಲ್ಲಿ ಟ್ರಸ್ಟ್‌ ನೋಂದಣಿಯಾಗಿದೆ. 

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ಪಾವತಿ ಸೇರಿದಂತೆ ಲೋಕೋಪಕಾರಿ ಉದ್ದೇಶಗಳಿಗಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್‌ಗಳು ಟ್ರಸ್ಟ್‌ಗೆ ತಲಾ ₹250 ಕೋಟಿ ಕೊಡುಗೆ ನೀಡಲು ಬದ್ಧವಾಗಿವೆ ಎಂದು ಶುಕ್ರವಾರ ತಿಳಿಸಿವೆ.

ADVERTISEMENT

ದುರಂತದಲ್ಲಿ ತೀವ್ರ ಗಾಯಗೊಂಡಿರುವವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಅಲ್ಲದೆ, ಅಪಘಾತದಲ್ಲಿ ಹಾನಿಗೀಡಾದ ಬಿ.ಜೆ.ವೈದ್ಯಕೀಯ ಕಾಲೇಜಿನ ವಸತಿ ನಿಲಯ ಸಮುಚ್ಚಯದ ಪುನಃ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದೆ.

ಜೂನ್‌ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ, ಟೇಕಾಫ್‌ ಆದ ಕೂಡಲೇ ಅಪಘಾತಕ್ಕೆ ಒಳಗಾಗಿತ್ತು. ಈ ಅಪಘಾತದಲ್ಲಿ 260 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.