ADVERTISEMENT

ಅಸ್ಥಿ ವಿಸರ್ಜನೆ: ಗೋಕರ್ಣಕ್ಕೆ ಬಂದ ಕುಮಾರ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಕುಮಟಾ: ಮಾಜಿ ಸಚಿವ ಕುಮಾರ ಬಂಗಾರಪ್ಪ ಮಂಗಳವಾರ ಕುಮಟಾ ತಾಲ್ಲೂಕಿನ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಅಪರ ಕಾರ್ಯ ನೆರವೇರಿಸಿದರು.

ಮುಂಜಾನೆ 8 ಗಂಟೆಯ ಹೊತ್ತಿಗೆ ಸಮುದ್ರ ದರ್ಶನ ಮಾಡಿ ಬಂದ ಕುಮಾರ ಬಂಗಾರಪ್ಪ ಅವರು ಕೋಟಿ ತೀರ್ಥದಲ್ಲಿ ತಂದೆಯ ಅಪರ ಕಾರ್ಯಗಳನ್ನು ಆರಂಭಿಸಿದರು. ದಶವಿಧ ಸ್ನಾನ, ನಿತ್ಯವಿಧಿ ನಂತರ ಕೋಟಿತೀರ್ಥದ ದಡದಲ್ಲಿ ಕೇಶಮಂಡನ ಮಾಡಿಸಿಕೊಂಡರು. ನಂತರ ತಾಮ್ರ ಗಂಗೆಯಲ್ಲಿ ಚಿತಾಭಸ್ಮ ವಿಸರ್ಜಿಸಿದರು.

`ತಂದೆಯ ಆತ್ಮಕ್ಕೆ ಶಾಂತಿ ಬಯಸಿ ನಾನು ಕೈಕೊಂಡ ಅಪರ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಉಂಟಾಗಿದೆ~ ಎಂದು  ಪತ್ರಕರ್ತರಿಗೆ ಅವರು  ತಿಳಿಸಿದರು.

ಕುಮಾರ ಬಂಗಾರಪ್ಪ ಅವರೊಂದಿಗೆ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಡಾ. ನಾರಾಯಣಪ್ಪ, ಕುಮಟಾ ಮಾಜಿ ಶಾಸಕ ಕೆ.ಎಚ್. ಗೌಡ,  ಮಾಜಿ ಶಾಸಕರುಗಳಾದ  ವಿರೂಪಾಕ್ಷಪ್ಪ, ಸಿ.ವಿ. ಹುಲಿಮನೆ ಹಾಗೂ ಬಂಧುಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.