ADVERTISEMENT

ಆನೆ ದಂತ ವಶ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಮೇ 2012, 19:30 IST
Last Updated 16 ಮೇ 2012, 19:30 IST

ಸೋಮವಾರಪೇಟೆ: ಅಡಗಿಸಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಆನೆ ದಂತಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ನಗರದ ಬಾಣಾವರ ರಸ್ತೆ ನಿವಾಸಿ ಸೋಮಶೇಖರ, ತೋಳೂರುಶೆಟ್ಟಳ್ಳಿಯ ಕೀರ್ತಿ ಹಾಗೂ ಬ್ರಹ್ಮಾವರದ ಮನೋಹರ್ ಎಂಬುವವರೇ ಬಂಧಿತರು.

ಸೋಮಶೇಖರ್ ಮನೆಗೆ ದಂತಗಳನ್ನು ಖರೀದಿಸುವವರಂತೆ ಹೋದ ಅರಣ್ಯ ಇಲಾಖೆ ಅಧಿಕಾರಿಗಳು, ಮಾಲು ಸಮೇತ ಮೂವರು ಆರೋಪಿಗಳನ್ನು ಬಂಧಿಸಿದರು. ಮನೆಯ ಒಳಗಿದ್ದ ಇನ್ನೂ ಇಬ್ಬರು ಪರಾರಿಯಾದರು.
 
48 ಕೆ.ಜಿ. ತೂಕವಿರುವ ದಂತ ರೂ 1.50 ಕೋಟಿ ಬೆಲೆ ಬಾಳುತ್ತದೆ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಸಿಐಡಿ ಸರ್ಕಲ್ ಇನ್ಸ್‌ಪೆಕ್ಟರ್ ರಾಜೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.