
ಪ್ರಜಾವಾಣಿ ವಾರ್ತೆಹಾವೇರಿ: `ಸಮೃದ್ಧ ಕರ್ನಾಟಕಕ್ಕಾಗಿ~ ಎನ್ನುವ ಘೋಷ ವಾಕ್ಯ ಹಾಗೂ ಉದ್ಯಮಿ ಅಶೋಕ ಖೇಣಿ ಬೆಂಬಲದೊಂದಿಗೆ ಕರ್ನಾಟಕ ಮಕ್ಕಳ ಪಕ್ಷ (ಕೆಎಂಪಿ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದಲ್ಲಿ ತನ್ನ ರಾಜಕೀಯ ಚಟುವಟಿಕೆ ಆರಂಭಿಸಲು ಸನ್ನದ್ಧವಾಗಿದೆ.
`ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಇದೇ 18 ರಂದು ಪಕ್ಷದ ಜಿಲ್ಲಾ ಮಟ್ಟದ ಕಚೇರಿ ಉದ್ಘಾಟನೆ ಮೂಲಕ ಪಕ್ಷದ ಚಟುವಟಿಕೆಗಳಿಗೆ ಅಶೋಕ ಖೇಣಿ ಚಾಲನೆ ನೀಡಲಿದ್ದಾರೆ~ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಬಿ.ನಾಗೇಂದ್ರಪ್ರಸಾದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.