ADVERTISEMENT

ನಾಯಿ ಪ್ರಿಯ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST
ನಾಯಿ ಪ್ರಿಯ ಚಿರತೆ ಸೆರೆ
ನಾಯಿ ಪ್ರಿಯ ಚಿರತೆ ಸೆರೆ   

ಕನಕಗಿರಿ (ಕೊಪ್ಪಳ ಜಿಲ್ಲೆ): ಸಮೀಪದ ಬಸರಿಹಾಳ, ಸೋಮಸಾಗರ ಹಾಗೂ ಅಡವಿಬಾವಿ ತಾಂಡ ಪರಿಸರದಲ್ಲಿ ಸೋಮವಾರ ನಸುಕಿನ ಜಾವದಲ್ಲಿ `ನಾಯಿ ಪ್ರಿಯ~ ಹಾಗೂ ಕಾಡು ಪ್ರಾಣಿ ಗಂಡು ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಒಂದು ತಿಂಗಳಿಂದಲೂ ಈ ಭಾಗದಲ್ಲಿನ ನಾಯಿ, ದನಕರು, ಆಡು, ಮೇಕೆ ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.           

ಚಿರತೆಯನ್ನು ಹಿಡಿಯಲು ಪಟ್ಟು ಹಿಡಿದು ಕುಳಿತ ಅಲ್ಲಿನ ನಿವಾಸಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಈರಪ್ಪ ಮಳ್ಳಿ ಅವರ ಹೊಲದಲ್ಲಿ ಬೋನಿನ ಒಂದೆಡೆ ಭಾಗದಲ್ಲಿ ನಾಯಿಯನ್ನು ಹಾಕಿ, ಗಿಡದ ಟೊಂಗೆಗಳಿಂದ ಬೋನನ್ನು ಮುಚ್ಚಿ ಜಾಣತನದಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.