
ಪ್ರಜಾವಾಣಿ ವಾರ್ತೆಕನಕಪುರ: ಬುಧವಾರದಿಂದ ಪಟ್ಟಣದ ಸೇರಿದಂತೆ ತಾಲ್ಲೂಕಿನಲ್ಲಿ ಒಂದೇ ಸಮನೆ ಮಳೆ ಬೀಳುತ್ತಿದ್ದು ರಸ್ತೆಯಲ್ಲಿ ಒಣಗಿದ ಮತ್ತು ಬಾಗಿದ ಮರಗಳು ಅ್ಲ್ಲಲಲ್ಲಿ ಉರುಳಿ ಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.
ಸಾತನೂರು ರಸ್ತೆ ತೋಟಳ್ಳಿ ಗೇಟ್ಬಳಿ, ರಾಮನಗರ ರಸ್ತೆಯ ಕೋಣನಸೆಡ್ಡು ಬಳಿ, ಬೆಂಗಳೂರು ರಸ್ತೆಯಲ್ಲಿ ಮತ್ತು ಬೂದಿಕೆರೆ ರಸ್ತೆಯ ಬಸ್ ನಿಲ್ದಾಣದ ಪಕ್ಕದಲ್ಲೇ ಮರಗಳು ಉರುಳಿಬಿದ್ದಿವೆ.
ಸಂಬಂಧಿಸಿದ ಇಲಾಖೆಯವರು ಉರುಳಿ ಬಿದ್ದಿದ್ದ ಮರಗಳನ್ನು ಕಡಿದು ತಾತ್ಕಲಿವಾಗಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲಿಯೂ ಯಾವುದೇ ಅಪಾಯಗಳು ಸಂಭವಿಸಿದ ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.