ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಸಮೀಪದ ಕಡೂರ ಗ್ರಾಮದ ಹೊರವಲಯದಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ಅವುಗಳನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.
ಕುಡಿವ ನೀರು ಪೂರೈಕೆ ಕೊಳವೆ ಒಳಗೆ ಮರಿಗಳು ಇದ್ದುದರಿಂದ ಅವು ಕಾಣಿಸುತ್ತಿರಲಿಲ್ಲ. ಆದರೆ ಬ್ಯಾಟರಿ (ಟಾರ್ಚ್) ಹಾಕಿ ನೋಡಿದರೆ ಕಾಣಿಸುತ್ತಿದ್ದವು. ಕೊಳವೆ ಮಧ್ಯಭಾಗದಲ್ಲಿ ಚಿರತೆಗಳಿದ್ದುದರಿಂದ ಅವುಗಳನ್ನು ಹೊರ ತೆಗೆಯುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ಮರಿಗಳನ್ನು ಕಾಯುತ್ತಿದ್ದು, ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ರಾತ್ರಿ ವೇಳೆ ತಾಯಿ ಚಿರತೆ ಪ್ರತ್ಯಕ್ಷವಾದರೆ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.