
ಪ್ರಜಾವಾಣಿ ವಾರ್ತೆಸವದತ್ತಿ(ಬೆಳಗಾವಿ ಜಿಲ್ಲೆ): ಇಲ್ಲಿಯ ಮಲಪ್ರಭಾ ನದಿಯ ಕಾಲುವೆಯಲ್ಲಿ ಮುಳುಗಿ 2 ಯುವಕರು ಸಾವಿಗೀಡಾದ ಘಟನೆ ಶನಿವಾರ ನಡೆದಿದೆ.
ಮೃತರನ್ನು ಸವದತ್ತಿ ಗಿರಿಜಣ್ಣವರ ಓಣಿ ನಿವಾಸಿಗಳಾದ ಶಿವಾಜಿ ಲಕ್ಷ್ಮಣ ಕಿಟದಾಳ(13), ಶಿವಾಜಿ ಯಲ್ಲಪ್ಪ ಶಿಬಾರಟ್ಟಿ(17) ಎಂದು ಗುರುತಿಸಲಾಗಿದೆ. ಶಿಬಾರಟ್ಟಿ ಎಂಬ ಯುವಕ ಜಾಕ್ವೆಲ್ ಬಳಿ ಈಜಲು ಹೋಗಿ ಮುಳುಗುತ್ತಿದ್ದಾಗ ರಕ್ಷಿಸಲು ಹೋದ ಕಿಟಾದಳ ಸಹ ನೀರು ಪಾಲಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.