ಮಂಗಳೂರು: ಜಿಲ್ಲೆಯ ಪುತ್ತೂರಿನಲ್ಲಿ ಪ್ರಾಯೋಗಿ ಕವಾಗಿ ಗುರುವಾರದಿಂದ ಜಾರಿಗೆ ಬಂದ `ನಾಗರಿಕ ಸೇವೆ ಖಾತರಿ ಕಾಯ್ದೆ~ಯಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಆರ್.ಎಸ್.ತಾರಾ ಎಂಬುವವರು ಸೇವೆ ಖಾತರಿಗಾಗಿ ಅರ್ಜಿ ಸಲ್ಲಿಸಿದರು.
`ಸಕಾಲ~ಕ್ಕೆ ಗುರು ವಾರ ಬೆಳಿಗ್ಗೆ ಚಾಲನೆ ನೀಡಿದ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಸ್ವೀಕೃತಿ ಪತ್ರ ನೀಡಿದರು. ಉದ್ಘಾಟನಾ ಸಮಾರಂಭ ಮುಕ್ತಾಯಗೊಳ್ಳುವ ಮುನ್ನವೇ ಆರು ಮಂದಿ ಸೇವಾ ಖಾತರಿಗೆ ಅರ್ಜಿ ಸಲ್ಲಿಸಿದರು. ಆರು ಅರ್ಜಿದಾರರ ಪೈಕಿ ಐದು ಮಂದಿಯ ಮೊಬೈಲ್ ಸಂಖ್ಯೆ ಒಂದೇ ಆಗಿದ್ದು, ಹೆಸರು ಮಾತ್ರ ಬೇರೆ ಬೇರೆ ಇದ್ದುದು ಗಮನ ಸೆಳೆಯಿತು.ಪ್ರಭಾರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಯೋಜನೆ ಬಗ್ಗೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.