
ಪ್ರಜಾವಾಣಿ ವಾರ್ತೆವಿಜಯಪುರ: ಪುರಸಭೆಯ ಸಿಬ್ಬಂದಿಗೆ ಬುಧವಾರ ಮುಖ್ಯಾಧಿಕಾರಿ ಎಂ.ಆರ್. ಮಂಜುನಾಥ್ ಸಿಬ್ಬಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2012 ಕುರಿತು ಮಾಹಿತಿ ನೀಡಿದರು.
ಪುರಸಭಾ ಸಭಾಂಗಣದಲ್ಲಿ ಪುರಸಭಾ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನೂತನ ಅಧಿನಿಯಮದಂತೆ ಅಧಿಕಾರಿ ವರ್ಗದವರು ಸಂಬಂಧಿಸಿದ ಇಲಾಖೆಯಿಂದ ನಾಗರಿಕರಿಗೆ ನೀಡಬೇಕಾದ ಸೇವೆಗಳನ್ನು ನಿಗದಿತ ಸಮಯದಲ್ಲಿ ಒದಗಿಸದಿದ್ದಲ್ಲಿ ದಿನಂಪ್ರತಿ 20 ರೂ. ದಂಡದಂತೆ ಕಠಿಣ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಕಿರಿಯ ಎಂಜಿನಿಯರ್ಗಳಾದ ಗೋಪಾಲಕೃಷ್ಣ, ಸರಿತಾ, ವ್ಯವಸ್ಥಾಪಕಿ ಸರಸ್ವತಿ, ಪರಿಸರ ಎಂಜಿನಿಯರ್ ಮಮತಾ, ಆರೋಗ್ಯಾಧಿಕಾರಿ ಮಂಜುಳಾ, ಪ್ರಥಮ ದರ್ಜೆ ಗುಮಾಸ್ಥರುಗಳಾದ ಬಾಬು, ಭೈರಪ್ಪ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.