ADVERTISEMENT

‘ಮೋದಿ ಸರ್ಕಾರ ಪುನರಾಯ್ಕೆಯಾದರೆ ಎಡಬಿಡಂಗಿಗಳಿಗೆ ಉಳಿಗಾಲವಿಲ್ಲ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 6:47 IST
Last Updated 29 ನವೆಂಬರ್ 2017, 6:47 IST

ಬಾಗಲಕೋಟೆ: ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಅವಧಿಗೆ ಮುಂದುವರಿದರೆ ಎಡಬಿಡಂಗಿಗಳು, ದೇಶದ್ರೋಹಿಗಳಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ನಗರದಲ್ಲಿ ಮಂಗಳವಾರ ಸಂಜೆ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಜಾತ್ಯತೀತರು, ಪ್ರಗತಿಪರರು, ಕ್ರಾಂತಿಕಾರಿಗಳ ಹೆಸರಿನಲ್ಲಿ ದೇಶ ಹಾಗೂ ಜನರ ದಿಕ್ಕುತಪ್ಪಿಸುತ್ತಿರುವರದ್ದು ಇದೇ ಕೊನೆಯ ತಲೆಮಾರು’ ಎಂದು ಹೇಳಿದರು.

ಸಾಹಿತ್ಯದ ಮೌಲ್ಯ ಕೊಂದ ಸಿ.ಎಂ: ‘ಎರಡು ಅಕ್ಷರ ಬರೆದು ಪೆನ್ನನ್ನು ಮತ್ತೊಬ್ಬರ ಬೂಟಿನ ಅಡಿಗೆ ಇಡುವ ಗಂಜಿ ಗಿರಾಕಿಗಳನ್ನು ಬಳಸಿಕೊಂಡು ಸಾಹಿತ್ಯದ ಮೌಲ್ಯ ಕೊಂದ ಶ್ರೇಯ ಸಿದ್ದಣ್ಣನಿಗೆ ಸಲ್ಲುತ್ತದೆ’ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ADVERTISEMENT

‘ಎರಡು ಅಕ್ಷರ ಗೀಚಿ ಸಾಹಿತಿ ಪಟ್ಟ ಕಟ್ಟಿಕೊಳ್ಳುವ ಎಡಬಿಡಂಗಿಗಳು ಚಪ್ರಾಸಿ ಸಾಹಿತಿಗಳು’ ಎಂದು ಅನಂತಕುಮಾರ ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.