ADVERTISEMENT

ಸಾಲ ಖಾತೆಯ ಪ್ರತ್ಯೇಕ ಕೊಠಡಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:43 IST
Last Updated 6 ಏಪ್ರಿಲ್ 2013, 6:43 IST

ಹುನಗುಂದ: ಇಲ್ಲಿನ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡದಲ್ಲಿ ಬ್ಯಾಂಕಿನ ಸಾಲ ಖಾತೆಯ ಗ್ರಾಹಕರ ಪಾವತಿಯ ಪ್ರತ್ಯೇಕ ಕೊಠಡಿಯನ್ನು ಉಪಾಧ್ಯಕ್ಷ ರವಿ ಹುಚನೂರ ಇತ್ತೀಚೆಗೆ ಸರಳ ಪೂಜೆ ನೆರವೇರಿಸಿ ಉದ್ಘಾಟಿಸಿದರು.

ಪ್ರಧಾನ ವ್ಯವಸ್ಥಾಪಕ ಮನೋಹರ ವಾಲ್ಮೀಕಿ ಮಾತನಾಡಿ, `ಬ್ಯಾಂಕಿನ ಕೆಳ ಅಂತಸ್ತಿನಲ್ಲಿ ಉಳಿತಾಯ ಖಾತೆ ಮತ್ತು ಇತರ ಖಾತೆಗಳ ಗ್ರಾಹಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ವ್ಯವಸ್ಥೆಯನ್ನು ಕಟ್ಟಡದ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ಮಾಡಿದೆ. ಸಾಲಗಾರರು ಇದರ ಮಾಹಿತಿಯನ್ನು ಪಡೆದು ಸಹಕರಿಸಬೇಕು' ಎಂದರು.

  ನಿರ್ದೇಶಕರಾದ ಶಶಿಕಾಂತ ಪಾಟೀಲ, ಸಿದ್ದಪ್ಪ ಹೊಸೂರ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಬಿ.ವಿ.ಪಾಟೀಲ, ಎ.ಆರ್.ನಿಂಬಲಗುಂದಿ, ಎಸ್. ವಿ. ಹಳಪೇಟಿ ಮತ್ತು ಉಪಪ್ರಧಾನ ವ್ಯವಸ್ಥಾಪಕ ಸಂಗಣ್ಣ ಗಂಜಿಹಾಳ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.