ADVERTISEMENT

ಕೆರೂರ: ಅಯೋಧ್ಯೆಗೆ ಹೊರಟಿದ್ದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2024, 15:43 IST
Last Updated 27 ಮೇ 2024, 15:43 IST
ದಾನಮ್ಮ ಯಮನಪ್ಪ ಮುಳಗುಂದ
ದಾನಮ್ಮ ಯಮನಪ್ಪ ಮುಳಗುಂದ   

ಕೆರೂರ: ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳಿದ್ದ ಪಟ್ಟಣದ ನಿವಾಸಿ ದಾನಮ್ಮ ಯಮನಪ್ಪ ಮುಳಗುಂದ (62) ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಶುಕ್ರವಾರ(ಮೇ 24) ಪಟ್ಟಣದಿಂದ 30 ಜನರ ಗುಂಪು ಅಯ್ಯೋಧ್ಯ ,ಕಾ ದರ್ಶನಕ್ಕೆ ಹೊರಟಿದ್ದರು. ಭಾನುವಾರ(ಮೇ 26) ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ದಾನಮ್ಮ ಮುಳಗುಂದ ಬಿಸಿಲಿನ ಬೇಗೆ ತಾಳಲಾರದೆ ಮೃತ್ತಪಟ್ಟಿದ್ದಾರೆ.

ಉಳಿದ ಪ್ರಯಣಕರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.

ADVERTISEMENT

 ಸುದ್ದಿ ತಿಳಿದ ಜಿಲ್ಲೆಯ ಸಂಸದ ಪಿ.ಸಿ.ಗದ್ದಿಗೌಡರ ತಮ್ಮ ಆಪ್ತಸಹಾಯಕನಿಗೆ ದೂರವಾಣಿ ಕರೆ ಮಾಡಿ, ಶವವನ್ನು ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ತಲುಪುವಂತೆ ವ್ಯವಸ್ಥೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.