ADVERTISEMENT

ಬಾಗಲಕೋಟೆಯಲ್ಲಿ ಎಸಿಬಿ ದಾಳಿ: ಆರ್‌ಟಿಒ ಅಧಿಕಾರಿ ಮನೆಯಲ್ಲಿ ₹16 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 5:44 IST
Last Updated 17 ಜೂನ್ 2022, 5:44 IST
ಆರ್‌ಟಿಒ ಅಧಿಕಾರಿ ಮನೆಯಲ್ಲಿ ₹16 ಲಕ್ಷ ನಗದು ವಶ
ಆರ್‌ಟಿಒ ಅಧಿಕಾರಿ ಮನೆಯಲ್ಲಿ ₹16 ಲಕ್ಷ ನಗದು ವಶ   

ಬಾಗಲಕೋಟೆ: ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮನೆ ಮೇಲೆ ಶುಕ್ರವಾರ ದಾಳಿ ನಡೆದಿದೆ.

ಎಸಿಬಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ನವನಗರದ 55ನೇ ಸೆಕ್ಟರ್‌ನಲ್ಲಿರುವ ಯೋಜನಾಧಿಕಾರಿ ಶಂಕರಲಿಂಗೇಗೌಡ ಅವರ‌ ಮನೆ ಮೇಲೆ ದಾಳಿ ಮಾಡಿದೆ.

ವಿದ್ಯಾಗಿರಿಯಲ್ಲಿರುವ ನಿರ್ಮಿತಿ ಕೇಂದ್ರದ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ADVERTISEMENT

ಇಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಮನೆಯಲ್ಲಿ ₹16 ಲಕ್ಷ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನವನಗರದ 58ನೇ ಸೆಕ್ಟರ್‌ನಲ್ಲಿ ಮನೆಯಿದೆ. ಅವರಿಗೆ‌ ಸೇರಿದ‌ ಧಾರವಾಡದಲ್ಲಿರುವ ಮನೆ ಮೇಲೂ ದಾಳಿ ನಡೆಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.