ಜಮಖಂಡಿ (ಬಾಗಲಕೋಟೆ ಜಿಲ್ಲೆ): ಮಹಾರಾಷ್ಟ್ರದ ಜತ್ತ ತಾಲ್ಲೂಕು ಕರಾಡ ರೋಡದ ನಾಗದಪಠದ ಬಳಿ ಬುಧವಾರ ರಾತ್ರಿ ವಾಹನ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ರಹಮತಪೂರದ ಯುವತಿಯೊಬ್ಬರ ಮದುವೆಗೆ ಹೋಗುವಾಗ, ದುರ್ಘಟನೆ ಸಂಭವಿಸಿದೆ. ತೋದಲಬಾಗಿಯ ಅನುಸಯಾ ವಿಠ್ಠಲ ಮೋರೆ, ರೆಹನಾ ಕಲಮಡಿ, ಭಾಗ್ಯಾ ಅಂಬೇಕರ, ಲೋಕಾಪುರದ ನಿವೇದಿತಾ ಹವಾಲಿ, ಅಡಿಹುಡಿಯ ಉಜ್ವಲಾ ಶಿಂಧೆ ಮೃತರು. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.