ADVERTISEMENT

ಗುಳೇದಗುಡ್ಡ | ಮಳೆಗೆ 37.42 ಹೆಕ್ಟೇರ್ ಬೆಳೆ ಹಾನಿ: ಆನಂದ ಗೌಡರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:10 IST
Last Updated 4 ಜುಲೈ 2025, 14:10 IST
ಗುಳೇದಗುಡ್ಡ ತಾಲ್ಲೂಕಿನ  ಗ್ರಾಮಗಳಲ್ಲಿ ಜಮೀನಿಗೆ ಭೇಟಿ ನೀಡಿದ ಕೃಷಿ ಅಧಿಕಾರಿ ಆನಂದ ಗೌಡರ ಅವರು ಹಾನಿಯಾದ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. 
ಗುಳೇದಗುಡ್ಡ ತಾಲ್ಲೂಕಿನ  ಗ್ರಾಮಗಳಲ್ಲಿ ಜಮೀನಿಗೆ ಭೇಟಿ ನೀಡಿದ ಕೃಷಿ ಅಧಿಕಾರಿ ಆನಂದ ಗೌಡರ ಅವರು ಹಾನಿಯಾದ ಬೆಳೆಗಳ ಬಗ್ಗೆ ಮಾಹಿತಿ ಪಡೆದರು.    

ಗುಳೇದಗುಡ್ಡ: ತಾಲ್ಲೂಕಿನಲ್ಲಿ ಸುರಿದ ಮಳೆಯ ಪರಿಣಾಮವಾಗಿ ತಾಲ್ಲೂಕಿನಲ್ಲಿ ಅಂದಾಜು 95 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ ಎಂದು ಕೃಷಿ ಅಧಿಕಾರಿ ಆನಂದ ಗೌಡರ ಹೇಳಿದರು.

ಅವರು ಬುಧವಾರ ತಾಲೂಕಿನ ಕಟಗೇರಿ, ಲಾಯದಗುಂದಿ, ಕೊಟ್ನಳ್ಳಿ, ಸಬ್ಬಲಹುಣಸಿ, ನಾಗರಾಳ ಎಸ್‍ಪಿ, ಅಲ್ಲೂರ ಎಸ್‍ಪಿ, ಹಂಗರಗಿ ಸೇರಿದಂತೆ ತಾಲೂಕಿನ 24 ಹಳ್ಳಿಗಳಲ್ಲಿನ ಗೋವಿನಜೋಳ 16.65 ಹೆಕ್ಟೇರ್, ಸಜ್ಜಿ 0.95 ಹೆಕ್ಟೇರ್, ಹೈಬ್ರೀಡ್ ಜೋಳ 2.7 ಹೆಕ್ಟೇರ್, ಉಳ್ಳಾಗಡ್ಡಿ 4.11ಹೆಕ್ಟೇರ್, ಹತ್ತಿ 6.4 ಹೆಕ್ಟೇರ್, ಹೆಸರು 4.86 ಹೆಕ್ಟೇರ್, ಕಬ್ಬು 0.85 ಹೆಕ್ಟೇರ್ ಬೆಳೆ ಹಾನಿಯಾಗಿದೆ ಮತ್ತು ಇತರೆ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

‘ಈಗ ಸರ್ವೇ ಕಾರ್ಯ ಕಾರ್ಯ ಮುಗಿದಿದ್ದು, 37.42 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಬೆಳೆಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಬೆಳೆ ವಿಮೆ ಮಾಡಿಸಿದ ರೈತರ ಖಾತೆಗೆ ನೇರವಾಗಿ ವಿಮೆ ಹಣ ಜಮೆಯಾಗಲಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.