ADVERTISEMENT

ಪತಿಯಿಂದ ರಕ್ಷಣೆ ನೀಡುವಂತೆ ಆಗ್ರಹ: ಬಿಸಿಲಲ್ಲಿ 15 ಕಿ.ಮೀ ನಡೆದು ಬಂದ ಮಹಿಳೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 8:48 IST
Last Updated 7 ಮೇ 2020, 8:48 IST
ಸಂತ್ರಸ್ತ ಮಹಿಳೆ
ಸಂತ್ರಸ್ತ ಮಹಿಳೆ   

ಬಾಗಲಕೋಟೆ: ಪತಿ ತನಗೆ ಜೀವ ಬೆದರಿಕೆ ಒಡ್ಡಿದ್ದು ಆತನಿಂದ ರಕ್ಷಣೆ ನೀಡುವಂತೆ ಮಹಿಳೆಯೊಬ್ಬರು ಲಾಕ್ ಡೌನ್ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಸುಗೂಸಿನೊಂದಿಗೆ 15 ಕಿ.ಮೀ ನಡೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ತಮನಾಳ ಗ್ರಾಮದಿಂದ ಉರಿ ಬಿಸಿಲಲ್ಲಿ ಗೃಹಿಣಿ ಅಶ್ವಿನಿ ನಡೆದುಬಂದು ಬಾದಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏಳು ವಷ೯ಗಳ ಹಿಂದೆ ಪತಿ ದೇವರಾಜ್ ಅವರನ್ನು ಪ್ರೀತಿಸಿ ಅಶ್ವಿನಿ ಅಂತಜಾ೯ತಿ ವಿವಾಹವಾಗಿದ್ದರು.

ADVERTISEMENT

ಇದೀಗ ಪತಿ ದೇವರಾಜ್ ಎರಡನೇ ಮದುವೆಯಾಗಿದ್ದು, ಆ ಬಗ್ಗೆ ಅಶ್ವಿನಿ ಈ ಮೊದಲು ಪೊಲೀಸರಿಗೆ ದೂರು ನೀಡಿದ್ದರು.

ನಂತರ ಪೊಲೀಸರು ದೇವರಾಜ ಅವರನ್ನು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಹೊರ ಬಂದಿರುವ ಪತಿಯಿಂದ ಮಗುವಿಗೆ ಮತ್ತು ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ತಮನಾಳದಿಂದ ಬಾದಾಮಿವರೆಗೆ ನಡೆದುಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.