ಹುನಗುಂದ: ತಾಲ್ಲೂಕಿನ ಚಿತ್ತಾವಾಡಗಿ, ಯಡಹಳ್ಳಿ, ವೀರಪೂರ, ಬನ್ನಿಹಟ್ಟಿ, ಹಿರೇಬಾದವಾಡಗಿ, ಚಿಕ್ಕಬಾದವಾಡಗಿ ಸೇರಿದಂತೆ ಕೆಲವು ಭಾಗಗಳಲ್ಲಿ ಭಾನುವಾರ ಸಂಜೆ ಮಳೆ ಅರ್ಭಟಿಸಿದೆ.
ಒಂದೂವರೆ ಗಂಟೆ ಜೋರು ಮಳೆ ಆಗಿದೆ.
ಮಳೆ ಆರ್ಭಟಕ್ಕೆ ಹೆಸರು, ಸೂರ್ಯಕಾಂತಿ, ಮೆಣಸಿನಕಾಯಿ, ತೊಗರಿ, ಗೋವಿನಜೋಳ ಬೆಳೆಗಳಲ್ಲಿ ಕೆಲವು ಕಡೆ ನೀರು ನಿಂತಿದ್ದರೆ, ತಗ್ಗು, ಒಡ್ದು ಹಾಗೂ ಬದುಗಳಲ್ಲಿ ಸಹ ಹೆಚ್ಚಿನ ಪ್ರಮಾಣದ ನೀರು ನಿಂತಿದೆ.
ಜೋರು ಮಳೆಗೆ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ಗದ್ದನಗೌಡ ಗೌಡರ ಮನೆಗೆ ಚರಂಡಿ ಮತ್ತು ಮಳೆ ನೀರು ನುಗ್ಗಿ ಕೆಲ ಸಮಯ ಅವಾಂತರ ಸೃಷ್ಟಿಸಿತು.
ಗ್ರಾಮದ ಹೊರ ವಲಯದ ಲಂಡಕೇನಹಳ್ಳದ ಕೆಳ ಸೇತುವೆ ಮೇಲೆ ನೀರು ಹರಿಯಿತು. ಸೇತುವೆ ಮಧ್ಯ ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಗೋಡೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.