ADVERTISEMENT

ಅನ್ನಪ್ರಸಾದಕ್ಕೆ 5 ಕ್ವಿಂಟಲ್ ಜಿಲೇಬಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 15:49 IST
Last Updated 29 ಅಕ್ಟೋಬರ್ 2024, 15:49 IST
ತೇರದಾಳದ ಅಲ್ಲಮಪ್ರಭು ದೇವಸ್ಥಾನ ಕಾರ್ಯಕ್ರಮದ ಅನ್ನಪ್ರಸಾದಕ್ಕೆ ಸಲ್ಲಿಸಲು ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು 5 ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಹೊತ್ತು ಬಂದರು
ತೇರದಾಳದ ಅಲ್ಲಮಪ್ರಭು ದೇವಸ್ಥಾನ ಕಾರ್ಯಕ್ರಮದ ಅನ್ನಪ್ರಸಾದಕ್ಕೆ ಸಲ್ಲಿಸಲು ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು 5 ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಹೊತ್ತು ಬಂದರು   

ತೇರದಾಳ: ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು ಅನ್ನಪ್ರಸಾದ ವಿತರಣೆಗೆ 5 ಕ್ವಿಂಟಲ್ ಜಿಲೇಬಿ ನೀಡಿ, ಭಕ್ತಿ ಮೆರೆದರು.

ಪಟ್ಟಣದ ಆರಾಧ್ಯ ದೈವ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಮಂಗಲದ ಬಳಿಕ ಭಕ್ತರಿಗೆ ವಿತರಣೆಯಾಗುವ ಅನ್ನಪ್ರಸಾದಕ್ಕೆ ದಿನಕ್ಕೊಂದು ಭಕ್ಷ್ಯವನ್ನು ಭಕ್ತರು ತಯಾರಿಸಿ, ಇಲ್ಲವೇ ದವಸ, ಧಾನ್ಯ ಅಥವಾ ಹಣದ ರೂಪದಲ್ಲಿ ದೇಣಿಗೆ ನೀಡುತ್ತ ಬಂದಿದ್ದಾರೆ.

16ನೇ ದಿನವಾದ ಮಂಗಳವಾರ ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು ದೇಣಿಗೆ ಸಂಗ್ರಹಿಸಿ 5 ಕ್ವಿಂಟಲ್ ಜಿಲೇಬಿ ತಯಾರಿಸಿ, ಮಹಿಳೆಯರು ತಯಾರಿಸಿದ ರೊಟ್ಟಿ ಹಾಗೂ ಸಂಗ್ರಹಿಸಿದ ₹3 ಲಕ್ಷ ಹಣವನ್ನು ದೇವಸ್ಥಾನ ಲೋಕಾರ್ಪಣೆ ಸಮಿತಿಗೆ ನೀಡಿದರು.

ADVERTISEMENT

ಜಿಲೇಬಿ ತಯಾರಿಸಿ ಭಕ್ತರು ತಲೆ ಮೇಲೆ ಹೊತ್ತು ಅಂದಾಜು ಆರು ಕಿ.ಮೀ ಕಾಲ್ನಡಿಗೆಯಲ್ಲಿಯೇ ಬಂದು ದೇವಸ್ಥಾನ ತಲುಪಿದರು. 

ತೇರದಾಳದ ಅಲ್ಲಮಪ್ರಭು ದೇವಸ್ಥಾನ ಕಾರ್ಯಕ್ರಮದ ಅನ್ನಪ್ರಸಾದಕ್ಕೆ ಸಲ್ಲಿಸಲು ತಾಲ್ಲೂಕಿನ ಗೋಲಬಾವಿ ಗ್ರಾಮದ ಭಕ್ತರು 5 ಕ್ವಿಂಟಲ್ ಜಿಲೇಬಿ ಹಾಗೂ ರೊಟ್ಟಿ ಹೊತ್ತು ಬಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.