ಹುನಗುಂದ: ಹುನಗುಂದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) 5 ವರ್ಷದ ಅವಧಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಿಲಿತ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಕೆಂದ್ರ ಶಾಲೆಯಲ್ಲಿ ಇಂದು ನಡೆದ ಮತದಾನದಲ್ಲಿ ‘ಸಿ’ ವರ್ಗದ (ವ್ಯಕ್ತಿಗತ) ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ ಗಿರಿಜಾ ಮ. ಗಂಜಿಹಾಳ (373), ಮಹಾಂತಮ್ಮ ಮು.ಹೊಸುರು (361). ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ರಾಮಣ್ಣ ಭಜಂತ್ರಿ (332) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
‘ಎ’ ವರ್ಗ (ಸದಸ್ಯ ಸಂಘಗಳಿಂದ) 4 ಸ್ಥಾನಕ್ಕೆ ಕ್ರಮವಾಗಿ ಪಿಕೆಪಿಎಸ್ ಹಿರೇಶಿಂಗನಗುತ್ತಿಯಿಂದ ಮಹಾಂತೇಶ ಬ. ಪಾಟೀಲ (27), ಪಿಕೆಪಿಎಸ್ ರಾಮಥಾಳದಿಂದ ಮತ್ತಪ್ಪ ಮುಳ್ಳೂರ (26), ಪಿಕೆಪಿಎಸ್ ಹಿರೇಓತಗೇರಿಯಿಂದ ನಿಂಗಪ್ಪ ಹಂಚಿನಾಳ (22) ಎಲ್ಲರೂ ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಗಳು. ಪಿಕೆಪಿಎಸ್ ತುಂಬದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮರಯ್ಯ ಮ.ಹಿರೇಮಠ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಬಸವಂತಪ್ಪ ಅಂಟರತಾನಿ, ಮಹಾಲಿಂಗಯ್ಯ ಹಿರೇಮಠ, ಹಿಂದುಳಿದ ವರ್ಗದ ಅ ಕ್ಷೇತ್ರದಿಂದ ಜೈನಸಾಬ್ ಹಗೇದಾಳ, ಹಿಂದುಳಿದ ವರ್ಗದ ಬ ಕ್ಷೇತ್ರದಿಂದ ಬಸವರಾಜ ಬಂಗಾರಿ, ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಮಂಜುನಾಥ ಕಟಗಿ ಕಾಂಗ್ರೆಸ್ ಬೆಂಬಲಿತ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ವಿಜಯಾನಂದ ಕಾಶಪ್ಪನವರು ಮಾತನಾಡಿ, ಬಿಜೆಪಿ ನಾಲ್ವರನ್ನು ಸಿ ವರ್ಗದ ಸಂಘದಿಂದ ನಡೆಯುವ ಚುಣಾವಣೆಯಲ್ಲಿ ಅಭ್ಯರ್ಥಿಗಳನ್ನು ಅನಧಿಕೃತವಾಗಿ ಹಾಗೂ ಕಾನೂನು ಬಾಹಿರವಾಗಿ ನಿಲ್ಲಿಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡರೂ, ಚುನಾವಣೆ ನಡೆಯಿತು. ಟಿಎಪಿಸಿಎಂಎಸ್ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ತೆಕ್ಕೆಯಲ್ಲಿದ್ದು, ಮುಂದೆಯೂ ಕಾಂಗ್ರೆಸ್ ಹಿಡಿತದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.