ಬಾಗಲಕೋಟೆ: ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಮುಧೋಳ ಶ್ವಾನಗಳು ಈಗ ಪ್ರಧಾನಮಂತ್ರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ(ಎಸ್ಪಿಜಿ) ಸೇರಿವೆ.
ಮುಧೋಳದ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದಿಂದ ಎಸ್ ಪಿಜಿ ವೈದ್ಯರ ತಂಡ ನಾಯಿಗಳನ್ನು ಒಯ್ದಿದೆ.
ಎರಡು ಗಂಡು ನಾಯಿ ಮರಿಗಳನ್ನು ತೆಗೆದುಕೊಂಡು ಹೋಗಲಾಗಿದೆ.
ಈಗಾಗಲೇ ಕೇರಳ, ಕರ್ನಾಟಕ ಪೊಲೀಸ್ಪಡೆ, ಬಿಎಸ್ಎಫ್ನವರು ಮುಧೋಳದ ನಾಯಿಗಳನ್ನು ತೆಗೆದುಕೊಂಡು ಹೋಗಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.