ADVERTISEMENT

ಮುಂದಿನ ಮುಖ್ಯಮಂತ್ರಿ ನಿರಾಣಿ ಎಂಬ ಪೋಸ್ಟ್ ವೈರಲ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 8:42 IST
Last Updated 17 ಆಗಸ್ಟ್ 2022, 8:42 IST
ನಿರಾಣಿ
ನಿರಾಣಿ    

ಬಾಗಲಕೋಟೆ: ಮುಂದಿನ ಮುಖ್ಯಮಂತ್ರಿ, ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರಿಗೆ 57ನೇ ಜನ್ಮ ದಿನ ಶುಭಾಶಯ ಕೋರಿದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂದಿನ ಮುಖ್ಯಮಂತ್ರಿ, ಜಮಖಂಡಿ ಜಿಲ್ಲೆಯ ಕನಸು ನನಸಾಗುವ ನಾಯಕನಿಗೆ ಶುಭಾಶಯ ಎಂದು ಅವರ ಆಪ್ತ ಸಹಾಯಕ ಕಿರಣ ಬಡಿಗೇರ ಅವರ ಹೆಸರಿನಲ್ಲಿ ಹರಿದಾಡುತ್ತಿದೆ.

ಆ.18 ರಂದು ನಿರಾಣಿ ಅವರ ಜನ್ಮ ದಿನವಿದ್ದು, ಆ ಹಿನ್ನೆಲೆಯಲ್ಲಿ ಶುಭಾಶಯ ಕೋರಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯೆಗೆ ಕಿರಣ ಬಡಿಗೇರ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.