ADVERTISEMENT

ತೇರಿನ ಚಕ್ರಕ್ಕೆ ಸಿಲುಕಿ ಒಬ್ಬನ ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:24 IST
Last Updated 17 ಡಿಸೆಂಬರ್ 2019, 14:24 IST

ಬಾಗಲಕೋಟೆ: ತಾಲ್ಲೂಕಿನ ಲವಳೇಶ್ವರ ತಾಂಡಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಮಂಗಳವಾರ ಸಂಜೆ ರಥೋತ್ಸವದ ವೇಳೆ ತೇರಿನದ ಚಕ್ರ ತಲೆಗೆ ಬಡಿದು ಭಕ್ತರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬರ ಕಾಲು ಕತ್ತರಿಸಿವೆ.

ಸಮೀಪದ ಜಡ್ರಾಮಕುಂಟಿ ಗ್ರಾಮದ ಬಸಪ್ಪ ಬಿಂಗಿ (28) ಸಾವಿಗೀಡಾದವರು. ಅದೇ ಗ್ರಾಮದ ಶರಣಪ್ಪ ಕುಂಬಾರ ಕಾಲು ಕಳೆದುಕೊಂಡವರು.

ತೇರು ಹರಿಯುವಾಗ ಚಕ್ರದ ಬಳಿಯೇ ಇದ್ದ ಇಬ್ಬರೂ ನೂಕು–ನುಗ್ಗಲಿನಲ್ಲಿ ಆಯತಪ್ಪಿ ಚಕ್ರಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.