ADVERTISEMENT

ರಬಕವಿ ಬನಹಟ್ಟಿ: ಅಗತ್ಯ ವಸ್ತುಗಳ ದರ ಏರಿಕೆ ನಡುವೆಯೂ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:42 IST
Last Updated 16 ಫೆಬ್ರುವರಿ 2026, 7:42 IST
ಬನಹಟ್ಟಿಯ ಮಂಗಳವಾರಪೇಟೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಗೆಣಸು, ಬಾಳೆ ಹಣ್ಣುಗಳನ್ನು ಗ್ರಾಹಕರು ಖರೀದಿಸಿದರು
ಬನಹಟ್ಟಿಯ ಮಂಗಳವಾರಪೇಟೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಗೆಣಸು, ಬಾಳೆ ಹಣ್ಣುಗಳನ್ನು ಗ್ರಾಹಕರು ಖರೀದಿಸಿದರು   

ರಬಕವಿ ಬನಹಟ್ಟಿ: ಇಲ್ಲಿನ ಮಂಗಳವಾರ ಪೇಟೆಯಲ್ಲಿ ಭಾನುವಾರ ಪ್ರತಿಯೊಂದು ವಸ್ತುಗಳು ದುಪ್ಪಟ್ಟು ಬೆಲೆಗೆ ಮಾರಾಟಗೊಂಡಿದ್ದರಿಂದ ಮಹಾಶಿವರಾತ್ರಿ ಆಚರಣೆ ಸಾಮಾನ್ಯ ಜನರಿಗೆ ಬಹಳಷ್ಟು ದುಬಾರಿ ಎನಿಸಿತು.

ಬಾಳೆ ಹಣ್ಣು ಕೆ.ಜಿಗೆ ₹80ರಿಂದ ₹100, ದ್ರಾಕ್ಷಿ ₹150 ಸೇರಿದಂತೆ ಕಲ್ಲಂಗಡಿ, ಚಿಕ್ಕು ಹಣ್ಣುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಯಿತು. ಗೆಣಸು ಕೆ.ಜಿಗೆ ₹30 ಇತ್ತು.

ಸಾಬೂದಾನಿ, ಬೆಲ್ಲ, ಖರ್ಜೂರು ಮತ್ತು ಶೇಂಗಾ ಮಾರಾಟ ಜೋರಾಗಿತ್ತು. ಶೇಂಗಾ ಕೆ.ಜಿಗೆ ₹150ರಿಂದ ₹160 ದರ ನಿಗದಿಮಾಡಲಾಗಿತ್ತು.

ADVERTISEMENT

ಸಂಚಾರಕ್ಕೆ ತೊಂದರೆ: ಶಿವರಾತ್ರಿ ಆಚರಣೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಬೆಳಿಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಸೇರಿದ್ದರಿಂದ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಅಂಗಡಿಗಳು ಮತ್ತು ದ್ವಿಚಕ್ರ ವಾಹನಗಳು ರಸ್ತೆ ಬದಿಯೇ ಇದ್ದಿದ್ದರಿಂದ ಸಮಸ್ಯೆಯಾಯಿತು.

ಬನಹಟ್ಟಿಯ ಮಂಗಳವಾರಪೇಟೆಯಲ್ಲಿ ಉತ್ತರಾಣಿ ಕಡ್ಡಿಗಳನ್ನು ಮಾರಾಟ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.