ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿಯಲ್ಲಿ ಗುರುವಾರ ಸಂಜೆ ಬಿರುಸಿನ ಮಳೆ ಬಿದ್ದಿದೆ. ಸಂಜೆ 6.30ರ ವೇಳೆಗೆ ತಾಲ್ಲೂಕಿನ ಸೀಮಿಕೇರಿಯಲ್ಲಿ 27 ಮಿಲಿಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಗದ್ದನಕೇರಿಯಲ್ಲಿ 19 ಮಿ.ಮೀ, ಬಾಗಲಕೋಟೆ ನಗರ 5.5 ಮೀಟರ್, ದೇವನಾಳ 8.5, ರಾಂಪುರ 12 ಮಿ.ಮೀ ಮಳೆ ಬಿದ್ದಿದೆ.
ಜಮಖಂಡಿ ತಾಲ್ಲೂಕಿನ ಮರೇಗುದ್ದಿಯಲ್ಲಿ 23 ಮಿ.ಮೀ, ಕಡಪಟ್ಟಿ, ಮೈಗೂರಿನಲ್ಲಿ 11, ಲಿಂಗನೂರಿನಲ್ಲಿ 16, ಮುಧೋಳ ನಗರದಲ್ಲಿ 5, ಶಿರೋಳದಲ್ಲಿ 18, ಬೀಳಗಿ ತಾಲ್ಲೂಕಿನ ತೆಗ್ಗಿಯಲ್ಲಿ 14, ಸಿದ್ದಾಪುರದಲ್ಲಿ 10.5 ಮಿ.ಮೀ ಮಳೆಯಾಗಿದೆ. ಬಾದಾಮಿ ತಾಲ್ಲೂಕಿನ ಸೂಳಿಕೇರಿಯಲ್ಲಿ 6.5 ಹಾಗೂ ಹೊಸೂರಿನಲ್ಲಿ 12 ಮಿ.ಮೀಟರ್ ಮಳೆ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.