ಜಮಖಂಡಿ (ಬಾಗಲಕೋಟೆ): ಐದನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಅಪ್ಪಾಸಾಬ ವಿಠ್ಠಲ ಅವಟಿ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.
ಪಾಠ– ಪ್ರವಚನದ ವೇಳೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ ವಿರುದ್ಧ ಬಾಲಕಿ ಪಾಲಕರಲ್ಲಿ ದೂರಿದ್ದಳು. ಪೋಷಕರು ಶಾಲೆಗೆ ಬಂದು ವಿಚಾರಿಸುವಷ್ಟರಲ್ಲಿ ಶಿಕ್ಷಕ ಪರಾರಿಯಾಗಿದ್ದ. ಹೀಗಾಗಿ ಮರಳಿ ಗ್ರಾಮಸ್ಥರೊಂದಿಗೆ ಬಂದ ಪಾಲಕರು ಲೈಂಗಿಕ ಕಿರುಕುಳ ನೀಡಿರುವ ಶಿಕ್ಷಕನನ್ನು ಕೂಡಲೇ ಅಮಾನುತುಗೊಳಿಸುವಂತೆ ಒತ್ತಾಯಿಸಿದರು.
ಆರೋಪಿ ಶಿಕ್ಷಕ ನಾಪತ್ತೆಯಾಗಿದ್ದು, ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.