ADVERTISEMENT

ರಂಗಭೂಮಿ ನಟ, ನಿರ್ದೇಶಕ ಪ್ರಭಾಕರ ಕುಲಕರ್ಣಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 16:08 IST
Last Updated 20 ಜೂನ್ 2023, 16:08 IST
ಪ್ರಭಾಕರ ಕುಲಕರ್ಣಿ
ಪ್ರಭಾಕರ ಕುಲಕರ್ಣಿ   

ಬಾಗಲಕೋಟೆ: ರಂಗಭೂಮಿ ನಟ, ನಿರ್ದೇಶಕ ಪ್ರಭಾಕರ ಕುಲಕರ್ಣಿ (69) ಮಂಗಳವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅವರು ಬಾಗಲಕೋಟೆ ವಕೀಲರ ಸಂಘದ ಅಧ್ಯಕ್ಷರಾಗಿದ್ದರು.

‘ಹಯವದನ’, ‘ಸೂರ್ಯಾಸ್ತದಿಂದ ಸೂರ್ಯೋದಯವರೆಗೆ’, ‘ಪಾರಿಜಾತದವರು’, ‘ಪ್ರಸನ್ನ ವೆಂಕಟದಾಸರು’, ‘ಕಲ್ಯಾಣದಲ್ಲಿ ಒಂದು ಕ್ರಾಂತಿ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಲ್ಲದೆ ನಟನೆಯನ್ನೂ ಮಾಡಿದ್ದರು. ಕೆರೂರು ವಾಸುದೇವಾಚಾರ್ಯರು ಸ್ಥಾಪಿಸಿದ್ದ ‘ವಾಸುದೇವ ವಿನೋದಿನಿ ನಾಟ್ಯಸಭಾ’ ಪುನರುತ್ಥಾನಗೊಳಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.