ADVERTISEMENT

ಅಭಿಮಾನಿಯಿಂದ ದೀಡ್ ನಮಸ್ಕಾರ

ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲು ಬನಶಂಕರಿ ದೇವಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 13:57 IST
Last Updated 13 ಡಿಸೆಂಬರ್ 2019, 13:57 IST
ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿ ಹಿರೇಬೂದಿಹಾಳ ಗ್ರಾಮದ ಅಭಿಮಾನಿ ರಂಗಪ್ಪ ಮೊಕಾಶಿ ಬನಶಂಕರಿ ದೇವಸ್ಥಾನದಲ್ಲಿ ದೀಡ್ ನಮಸ್ಕಾರ ಹಾಕಿ ದೇವಿಗೆ ಹರಕೆ ಸಲ್ಲಿಸಿದರು.
ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿ ಹಿರೇಬೂದಿಹಾಳ ಗ್ರಾಮದ ಅಭಿಮಾನಿ ರಂಗಪ್ಪ ಮೊಕಾಶಿ ಬನಶಂಕರಿ ದೇವಸ್ಥಾನದಲ್ಲಿ ದೀಡ್ ನಮಸ್ಕಾರ ಹಾಕಿ ದೇವಿಗೆ ಹರಕೆ ಸಲ್ಲಿಸಿದರು.   

ಬನಶಂಕರಿ (ಬಾದಾಮಿ) : ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ ದಡ್ಡಿ ನೇತೃತ್ವದಲ್ಲಿ ಅವರ ಅಭಿಮಾನಿಗಳು ಬನಶಂಕರಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದರಾಮಯ್ಯ ಅಭಿಮಾನಿ ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ರಂಗಪ್ಪ ಮೊಕಾಶಿ ಇಲ್ಲಿನ ಹರಿದ್ರಾತೀರ್ಥ ಪುಷ್ಕರಣಿಯಿಂದ ದೇವಾಲಯದವರೆಗೆ ದೀಡ್‌ನಮಸ್ಕಾರ ಹಾಕಿ ದೇವಿಗೆ ಪೂಜೆ ಸಲ್ಲಿಸಿದರು.

ರಂಗಪ್ಪ ಮೊಕಾಶಿ ದೀಡ್ ನಮಸ್ಕಾರ ಹಾಕುವಾಗ ಹಿಂದೆ ಅಭಿಮಾನಿಗಳು ಕೈಯಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದುಕೊಂಡಿದ್ದರು.

ADVERTISEMENT

ಮುಖಂಡರಾದ ಭೀಮಪ್ಪ ಬಂದಕೇರಿ, ರಂಗಪ್ಪ ಹೂಲಗೇರಿ, ತಿಪ್ಪಣ್ಣ ಜೋಗಣ್ಣವರ, ಹನುಮಂತ ಮುಚ್ಚಳಗುಡ್ಡ, ಹನುಮಂತ ಖಾನಗೌಡ್ರ, ಶ್ರೀಕಾಂತ ಪೂಜಾರ, ಭೀಮಣ್ಣ ಆಡಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.