ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಸಮೀಪದ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ (32) ದೇವರನ್ನು ಒಲಿಸಿಕೊಳ್ಳಲು ಭಾನುವಾರ ನಾಲಿಗೆ ಕತ್ತರಿಸಿಕೊಂಡು ಕಾಣಿಕೆ ಅರ್ಪಿಸಿದ್ದಾರೆ.
ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ತಾತ ದೇವಸ್ಥಾನದಲ್ಲಿ ನಿತ್ಯ ಪೂಜೆ ಮಾಡುತ್ತಿದ್ದರು. ದೇವರು ನಾಲಿಗೆ ಕೇಳಿದ ಎನ್ನುತ್ತ ನಾಲಿಗೆಯನ್ನೇ ಕತ್ತರಿಸಿ ಕೊಂಡಿದ್ದಾರೆ. ಇದನ್ನು ಸಂಜ್ಞೆ ಮಾಡಿ ಮನೆಯವರಿಗೆ ತಿಳಿಸಿದರು. ಕುಟುಂಬಸ್ಥರು ನಾಲಿಗೆ ಹುಡುಕಿ, ತೆಕ್ಕಲಕೋಟೆ ಆಸ್ಪತ್ರೆಗೆ ಧಾವಿಸಿದ್ದಾರೆ. ಚಿಕಿತ್ಸೆಗೂ ಮುಂಚೆಯೇ ಓಡಿ ಹೋಗಿದ್ದ ಅವರನ್ನು ಮನೆಯವರು ಬಳ್ಳಾರಿಯ ವಿಮ್ಸ್ ಗೆ ದಾಖಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.