ADVERTISEMENT

ಸಂಡೂರು: ವಾಕಿಂಗ್ ಹೋದವರನ್ನು ಓಡಿಸಿಕೊಂಡು ಬಂದ ಕರಡಿ, ಒಬ್ಬರ ಕೈಮುರಿತ

​ಪ್ರಜಾವಾಣಿ ವಾರ್ತೆ
Published 4 ಮೇ 2020, 6:27 IST
Last Updated 4 ಮೇ 2020, 6:27 IST

ಸಂಡೂರು: ಇಲ್ಲಿನ ಎಸ್‌‌ಆರ್‌‌ಎಸ್‌ ಮೈದಾನದ ಬಳಿಯ ಹಾಲಿನ ಡೈರಿ ಬಳಿ ಸೋಮವಾರ ನಸುಕಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದ ಇಬ್ಬರನ್ನು ಕರಡಿಯೊಂದು ಓಡಿಸಿಕೊಂಡು ಬಂದ ಪರಿಣಾಮ, ಗಿರೀಶ್ ಎಂಬುವವರು ತಂತಿ ಬೇಲಿ ಹಾರಿ ಅಯತಪ್ಪಿ ಕೈ ಮುರಿದುಕೊಂಡು ಬಿದ್ದರು.

ಆಗ ಅವರ ಜೊತೆಯಲ್ಲಿದ್ದ ನಾಗಮೂರ್ತಿ ಎಂಬುವರನ್ನು ಕರಡಿ ಬೆನ್ನಟ್ಟಿತ್ತು. ಅವರು ಓಡುತ್ತಾ ಸ್ವಲ್ಪ ದೂರ ಬಂದಾಗ ಡೈರಿಯ ಸಿಬ್ಬಂದಿ ಜೊತೆಗೂಡಿದರು. ಆಗ ಕರಡಿ ಹಿಂತಿರುಗಿ ಹೋಯಿತು.

ಗಾಯಗೊಂಡವರಿಗೆ ಸಂಡೂರಿನ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹೊಸಪೇಟೆಗೆ ಕಳುಹಿಸಿಕೊಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.