ತೋರಣಗಲ್ಲು (ಸಂಡೂರು ತಾಲ್ಲೂಕು): ಸಮೀಪದ ದೊಡ್ಡ ಅಂತಾಪುರ ಗ್ರಾಮದ ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಮೇಕೆ ಕಾಯುವ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದೆ.
ಹೊನ್ನೂರಪ್ಪ ಎಂಬುವರು ಅರಣ್ಯದ ಅಂಚಿನಲ್ಲಿ ಮೇಕೆ ಕಾಯುವ ವೇಳೆ ಕರಡಿಯು ಏಕಾಏಕಿ ದಾಳಿ ನಡೆಸಿ, ಎಡಗೈ ಕಚ್ಚಿ ಗಾಯಗೊಳಿಸಿದೆ.
ಹೊನ್ನೂರಪ್ಪ ಅವರನ್ನು ಬಳ್ಳಾರಿಯ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.