ADVERTISEMENT

ಬಳ್ಳಾರಿ ರಾಘವ ಪ್ರಶಸ್ತಿ: ಗುಮ್ಮಡಿ ಗೋಪಾಲಕೃಷ್ಣ, ಡಿಂಗ್ರಿ ನಾಗರಾಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 17:04 IST
Last Updated 28 ಜುಲೈ 2025, 17:04 IST
<div class="paragraphs"><p>ಗುಮ್ಮಡಿ ಗೋಪಾಲಕೃಷ್ಣ,&nbsp;ಡಿಂಗ್ರಿ ನಾಗರಾಜ್</p></div>

ಗುಮ್ಮಡಿ ಗೋಪಾಲಕೃಷ್ಣ, ಡಿಂಗ್ರಿ ನಾಗರಾಜ್

   

ಬಳ್ಳಾರಿ: ರಂಗಭೂಮಿ ಕಲಾವಿದ ಬಳ್ಳಾರಿ ರಾಘವ ಹೆಸರಿನಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್  ನೀಡುವ ರಾಜ್ಯಮಟ್ಟದ ‘ಬಳ್ಳಾರಿ ರಾಘವ’ ಪ್ರಶಸ್ತಿಗೆ ರಂಗಕರ್ಮಿ ಮತ್ತು ನಟ ಡಿಂಗ್ರಿ ನಾಗರಾಜ್ ಮತ್ತು ಆಂಧ್ರಪ್ರದೇಶದ ಮೇಡೂರು ಗ್ರಾಮದ ರಂಗಕರ್ಮಿ ಗುಮ್ಮಡಿ ಗೋಪಾಲಕೃಷ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹21,100 ನಗದು ಮತ್ತು ಬೆಳ್ಳಿ ಫಲಕ ಹೊಂದಿದೆ.

ಬಳ್ಳಾರಿ ರಾಘವರ ಜಯಂತಿ ಪ್ರಯುಕ್ತ ಆಗಸ್ಟ್ 2 ಮತ್ತು 3ರಂದು ಬಳ್ಳಾರಿಯಲ್ಲಿ ನಡೆಯುವ ಸಮಾರಂಭ ಹಾಗೂ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.