ADVERTISEMENT

ಚಲವಾದಿಕೇರಿಯಲ್ಲಿ ಬಿಜೆಪಿಯಿಂದ ಸಿಎಎ ಜನಜಾಗೃತಿ ಇಂದು

ಸ್ಥಳೀಯರ ವಿರೋಧದಿಂದ ನಿನ್ನೆ ವಾಪಸಾಗಿದ್ದ ಪಕ್ಷದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 7:17 IST
Last Updated 7 ಜನವರಿ 2020, 7:17 IST
ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ಜನಜಾಗೃತಿ
ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ಜನಜಾಗೃತಿ   
""
""

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಕರಪತ್ರ ಹಂಚಿ ಜನಜಾಗೃತಿ ನಡೆಸಲು ಉದ್ದೇಶಿಸಿದ್ದ ಬಿಜೆಪಿ ಸೋಮವಾರ ಸ್ಥಳೀಯರ ವಿರೋಧದಿಂದ ತಡೆಹಿಡಿದು ಮಂಗಳವಾರ ಮತ್ತೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ.

ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಜನಜಾಗೃತಿಗೆ ಪೊಲೀಸ್ ಇಲಾಖೆ ಅವಕಾಶ ಕೊಟ್ಟಿರುವುದರಿಂದ ಚಲವಾದಿಕೇರಿ ರಸ್ತೆಯಲ್ಲಿ ಗೋ ಬ್ಯಾಕ್ ಎಂಬ ಬರೆಯಲಾಗಿದೆ. ನಾವು ಸಿಎಎ ತಿರಸ್ಕರಿಸುತ್ತೇವೆ ಎಂಬ ಘೋಷಣೆ ಹೊಂದಿರುವ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.

ಮನೆ ಹಾಗೂ ಮಳಿಗೆಗಳ ಮುಂದೆ ಅಂಟಿಸಿರುವ ಪೋಸ್ಟರ್

ಚಲವಾದಿಕೇರಿಯಲ್ಲಿ ಅಂಗಡಿ ಮುಂಗಟ್ಟು, ಮನೆಗಳ ಬಾಗಿಲು ಬಂದ್ ಮಾಡಿ ಸ್ಥಳೀಯರು ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಂಕೇತಿಕ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರಿಂದ ಕರ ಪತ್ರ ತೆಗೆದುಕೊಳ್ಳಲು ಸ್ಥಳೀಯರ ನಿರಾಕರಿಸಿದರು.

ADVERTISEMENT
ಅಂಗಡಿ ಮುಂಗಟ್ಟು, ಮನೆಗಳ ಬಾಗಿಲು ಬಂದ್ ಮಾಡಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಂಕೇತಿಕ ವಿರೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.