ಬಳ್ಳಾರಿ: ಅಹಮದಾಬಾದ್ನಿಂದ ವಾಪಸಾದ ಹರಪನಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಮಧ್ಯರಾತ್ರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಶನಿವಾರ ಬೆಳಗಿನ ಜಾವ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಪನಹಳ್ಳಿಗೆ ವಾಪಸಾದ ವಾಹನದಲ್ಲಿದ್ದ ಮೂವರು ಮತ್ತು ಇಬ್ಬರು ಚಾಲಕರನ್ನು ಹಡಗಲಿ ಚೆಕ್ ಪೋಸ್ಟ್ನಲ್ಲಿ ಮಧ್ಯರಾತ್ರಿ ತಡೆದು ತೋರಣಗಲ್ನ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಸೋಂಕಿತರಿಗೆ ಹರಪನಹಳ್ಳಿ ಪ್ರವೇಶಿಸಲು ಪ್ರವೇಶ ನೀಡದೇ ಇರುವುದರಿಂದ ಯಾವ ಪ್ರದೇಶವನ್ನೂ ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಿಲ್ಲ ಎಂದು ಅವರು ಹೇಳಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 18 ಜನರಿಗೆ ಸೋಂಕು ತಗುಲಿದ್ದು 13 ಮಂದಿ ಗುಣಮುಖರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.