ADVERTISEMENT

ಲೋಕ ಅದಾಲತ್‌: 1,257 ವ್ಯಾಜ್ಯ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:10 IST
Last Updated 14 ಸೆಪ್ಟೆಂಬರ್ 2024, 16:10 IST
ಹರಪನಹಳ್ಳಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಧೀಶೆ ಉಷಾರಾಣಿ ಆರ್‌. ಸಮ್ಮುಖದಲ್ಲಿ ಪ್ರಕರಣವೊಂದರ ರಾಜಿ ಸಂಧಾನ ಜರುಗಿತು
ಹರಪನಹಳ್ಳಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಧೀಶೆ ಉಷಾರಾಣಿ ಆರ್‌. ಸಮ್ಮುಖದಲ್ಲಿ ಪ್ರಕರಣವೊಂದರ ರಾಜಿ ಸಂಧಾನ ಜರುಗಿತು   

ಹರಪನಹಳ್ಳಿ: ಇಲ್ಲಿಯ ಜೆಎಂಎಫ್ ನ್ಯಾಯಾಲಯದ ಆವಣರದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ‌ದ ನಿರ್ದೇಶನದ ಅನ್ವಯ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1,257 ಪ್ರಕರಣ ಇತ್ಯರ್ಥಗೊಂಡವು.

ನ್ಯಾಯಧೀಶೆ ಉಷಾರಾಣಿ ಆರ್. ನೇತೃತ್ವದಲ್ಲಿ ಎರಡು ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 890 ಪ್ರಕರಣಗಳ ಪೈಕಿ ₹59,42 ಲಕ್ಷ ಮೌಲ್ಯದ 645 ಪ್ರಕರಣಗಳು,ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 775 ಪ್ರಕರಣಗಳ ಪೈಕಿ ₹18,25 ಲಕ್ಷ ಮೌಲ್ಯದ 612 ಪ್ರಕರಣ‌ಗಳನ್ನು ಇತ್ಯರ್ಥಪಡಿಸಲಾಗಿದೆ‌.

ADVERTISEMENT

ಹೆಚ್ಚುವರಿ ಸರ್ಕಾರಿ ವಕೀಲ ಕೆ. ಜಗದಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಸಿ. ಪೀರ್ ಅಹಮ್ಮದ್, ಕಾರ್ಯದರ್ಶಿ ಎಚ್.ಎಂ. ಕೇಶವಮೂರ್ತಿ, ಖಜಾಂಚಿ ಹೂಲೆಪ್ಪ, , ಸರ್ಕಾರಿ ಅಭಿಯೋಜಕಿ ಮಿನಾಕ್ಷಿ ಎನ್., ನಿರ್ಮಲ, ಸಿಬ್ಬಂದಿ ನಾಗರಾಜ್, ನಟರಾಜ್, ಉಜ್ವಲ, ಕೋಟ್ರೇಶ್, ಬಸವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.