ADVERTISEMENT

ಖಾತೆ ಬದಲಾವಣೆ: ‘ಕೈಗಾರಿಕೆ ಖಾತೆ ಸಿಗಬಹುದು’ ಎಂದ ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 10:44 IST
Last Updated 25 ಜನವರಿ 2021, 10:44 IST
ಸಚಿವ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್   

ಹೊಸಪೇಟೆ: ‘ಮುಂದೆ ಕೈಗಾರಿಕೆ ಖಾತೆ ಸಿಗಬಹುದು. ಕೈಗಾರಿಕೆ ಹಾಕಿ’ ಎಂದು ಸಚಿವ ಆನಂದ್‌ ಸಿಂಗ್‌ ಅವರು ಸೋಮವಾರ ನಗರದಲ್ಲಿನ ಅವರ ಕಚೇರಿಗೆ ಬಂದಿದ್ದ ಉದ್ಯಮಿ ರಾಜು ಭೂರಟ್‌ ಅವರಿಗೆ ಹೇಳಿದರು.

‘ನೀವು ಪ್ರವಾಸೋದ್ಯಮ ಸಚಿವರಾದ ವಿಷಯ ಕೇಳಿ ಖುಷಿಯಾಯಿತು. ನಿಮ್ಮನ್ನು ಅಭಿನಂದಿಸಲು ಬಂದಿರುವೆ’ ಎಂದು ರಾಜು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆನಂದ್‌ ಸಿಂಗ್‌, ‘ಟೂರಿಸಂ ಮಿನಿಸ್ಟರ್‌ ಪೋಸ್ಟ್‌ ನಿಕಾಲ್‌ ದಿಯಾ (ಪ್ರವಾಸೋದ್ಯಮ ಖಾತೆಯಿಂದ ನನ್ನನ್ನು ತೆಗೆದು ಹಾಕಿದ್ದಾರೆ). ಕೈಗಾರಿಕೆ ಖಾತೆ ಸಿಗಬಹುದು. ನೀವು ಕೈಗಾರಿಕೆ ಆರಂಭಿಸಿ’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.